Saturday, October 9, 2010

ಶಾಲೆಗೊಂದು ಪ್ರಯೋಗಶಾಲೆ !

ವಿಜ್ಞಾನದಂತಹ ಸಂಕೀರ್ಣ ವಿಷಯ ಬೋಧನೆಗೆ ಕೇವಲ ಮಾತಿನ ವಿವರಣೆ ಸಾಲದು. ಹೇಳಿಕೊಟ್ಟದ್ದಕ್ಕೆನೆನಪು ತಾತ್ಕಾಲಿಕ ಆದರೆ ಸ್ವತಹ ಮಾಡಿದ್ದರ ನೆನಪು ಹೆಚ್ಚು ಕಾಲ. ಹೀಗೆ ಸ್ವತಹ ಮಕ್ಕಳು ವಿಜ್ಞಾನ ಕಲಿಕೆಯಲ್ಲಿ ತೊಡಗಲು ಒಂದು ಪ್ರಯೋಗಶಾಲೆ ಅವಶ್ಯಕ. ಇಂತಹದೊಂದು ಅವಶ್ಯಕತೆ ನಮಗೆ ಬಹಳ ವರ್ಷಗಳಿಂದ ಇದ್ದಿತ್ತು. ಆದರೆ ಸಂತೆಕಲ್ಲಹಳ್ಳಿ ಇಂದಿರಾರ್ಪಣಂ ವೇಣುಗೋಪಾಲ್ ಹಾಗು ಇವರ ಪುತ್ರ ಸಂಜಯ್ ರವರ ಕಾಳಜಿಯ ಫಲವಾಗಿ ನಮ್ಮ ಪ್ರಯೋಗಶಾಲೆ ಎಂಬ ಅವಶ್ಯಕತೆ ಈಡೇರಿತು. ಸಂಜಯ್ ರವರು ಕಾರ್ಯ ನಿರ್ವಹಿಸುವ ಹನಿವೆಲ್ ಕಂಪೆನಿಯ ಮೂಲಕ ಸುಮಾರು ೩೫,೦೦೦ ರುಪಾಯಿ ಬೆಲೆಬಾಳುವ ಪ್ರಯೋಗಶಾಲೆಯ ಸಾಮಗ್ರಿಗಳು, ಅತ್ಯಮೂಲ್ಯಪುಸ್ತಕಗಳು ಹಾಗು ನೀರಿನ ಫಿಲ್ಟರ್ ಗಳನ್ನು ಶಾಲೆಗೆ ನೀಡಿದರು. ಈ ಸಾಮಗ್ರಿಗಳನ್ನು ಶಾಲೆಗೆ ಸಮರ್ಪಿಸುವ ಸಮಾರಂಭವನ್ನು ೨೬.೦೯.೨೦೧೦ ರ ಭಾನುವಾರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ಸಮಾರಂಭದಲ್ಲಿ ಬೆಂಗಳೂರಿನ ವಿಜ್ಞಾನಿ ಶಿವ ಸುಂದರಂ ರವರು ಅಂಗನವಾಡಿ ಮಕ್ಕಳಿಗಾಗಿ ಕೂರಲು ಜಮಖಾನೆಗಳನ್ನು ನೀಡಿದರು. ಸುಮದುರ ಕಂಠ ಹಾಗೂ ಕ್ರೀಡಾಪಟು ಆದ ಕುಮಾರಿ ದಿವ್ಯ ಎಂಬ ಗ್ರಾಮೀಣ ಪ್ರತಿಭೆಯನ್ನು ಪುರಸ್ಕರಿಸಲಾಯಿತು. ಖೋ-ಖೋ ಆಟದಲ್ಲಿ ನಮ್ಮ ಶಾಲೆ ಪಡೆದಿದ್ದ ತಾಲೂಕು ಹಾಗೂ ಜಿಲ್ಲ ಮಟ್ಟದ ಬಹುಮಾನಗಳನ್ನು ಮತ್ತು ತಾಲೂಕು ಮಟ್ಟದ ಭಾವ ಗೀತೆ ಸ್ಪರ್ದೆಯ ಬಹುಮಾನಗಳನ್ನು ಇದೇ ಸಮಾರಂಭದಲ್ಲಿ ವಿತರಿಸಲಾಯಿತು.
ಶಾಲಾಭಿತ್ತಿ ಪತ್ರಿಕೆಯಾದ ಬೇಲಿಹೂ ನ್ನು ಅನಾವರಣ ಮಾಡಲಾಯಿತು.

No comments:

Post a Comment